ಎಲ್ಲೋ ಹುದುಗಿದ ಮನಸಿನ ಭಾವನೆಗಳು. ಎಲ್ಲೋ ಅಡಗಿದ ಆ ನಿನ್ನ ನೆನಪಿನ ತಲ್ಲಣ. ನನಗ್ಯಾಕೆ ಹೀಗೆ ಎಂದು ವ್ಯತೆ ಪಟ್ಟೆ. ಆದರೂ ಉತ್ತರ ಸಿಗದ ಬಾಳಲಿ ಒಬ್ಬಂಟಿಯಾದೆ ನಾನು. ಹೀಗೆ ಕಾಲು ಚಾಚಿ ಮನಸನು ಅವಲೋಕಿಸಿದ ಕ್ಷಣ ಕ್ಷಣಕು ನಿನ್ನ ನೆನಪು ಬಂದು, ನನ್ನ ಕಣ್ಣಂಚಲಿ ನೀರು ತುಂಬಿ ಬರುತಿದೆ ಹುಡುಗಿ. ಬಿಸಿಲಿಗೆ ಬೆಂದರು ಸರಿ, ಆ ಮೈ ಕೊರೆವ ಚಳಿಯಲು ಸರಿ ಆ ನೆನಪು ಮಾತ್ರ ಅಳಿಸಲಾದಂತೆ ಜಡ್ಡು ಹಿಡಿದು ಕೂತಿದೆ. ನಾನೇನು ಹೇಳಲಿ.....ಯಾರೊಂದಿಗೆ ಹೇಳಲಿ ಈ ನನ್ನ ಮನಸಿನ ಹೂರಣ. ಕಥೆಯಾಗಿದ್ದ ಈ ನನ್ನ ಬಾಳು ಈಗ ವ್ಯಥೆಯಾಗಿ ನನ್ನ ಕಾಡುತಿದೆ. ಹೇ.......ಭಗವಂತನೆ ನನ್ನಲ್ಲಿರುವ ಅಡಕಗಳಿಗೆ ಪರಿಹಾರ ತಿಳಿಸು. ಈ ಪ್ರೀತಿಯೆಂಬ ಭ್ರಮೆಯ ರಾಕ್ಷಸನ ಸಂಹಾರ ಮಾಡು. ಇದು ನನ್ನ ಬಿನ್ನಹ. ಭ್ರಮೆಯ ಬದುಕಿಗೊಂದು ಮುಕ್ತಿ ಕೊಡು.
ಪ್ರಸಾದ್.........🖍
No comments:
Post a Comment