ದೇವರಿಗೆ ಪ್ರಶ್ನೆ
==========
ಒಬ್ಬಾತ ದೇವರ ಹತ್ತಿರ ಕೇಳ್ತಾನೆ.
ಇಡೀ ಭೂ ಮಂಡಲದ ರಕ್ಷಕನೂ ನೀನೆ ಅಂದ ಮೇಲೆ ಅರ್ಚಕರು ದೇವಸ್ಥಾನದ ಬಾಗಿಲಿಗೆ ಬೀಗ ಯಾಕೆ ಹಾಕಬೇಕು? ಅಂತ ಕೇಳಿದ.
ಆಗ ದೇವರು ನಿಧಾನವಾಗಿ ಹೇಳ್ತಾನೆ. ಮಗು...ನನ್ನ ರಕ್ಷಣೆ ನಾನು ಮಾಡುತ್ತೇನೆ. ಜಗದ ರಕ್ಷಣೆ ನಾನು ಮಾಡುತ್ತೇನೆ ನಿಜ. ಆದರೆ ನನಗೆ ಧರಿಸಿದ ಸಿರಿ ಸಿಂಗಾರಗಳ ರಕ್ಷಣೆ ಆಗಬೇಕಲ್ಲವೆ. ಇದನ್ನು ತೊಡಿಸಿದವರು ನೀವೆ ಅಂದ ಮೇಲೆ ಇದರ ರಕ್ಷಕರು ನೀವೆ ಅಲ್ಲವೇ..
.......................................................................................
ವಿರುದ್ಧ
======
ಪ್ರತಿ ರಾತ್ರಿ ಅಂಗಳದಲ್ಲಿ ಮೇಲೆ ನೋಡ್ಕೊಂಡು ಮಲಗ್ತಿದ್ದ ಒಬ್ಬಾತ ಅಂದ್ಕೋತಾನೆ. ನಾನೆ ಹೀಗೆ ನಕ್ಷತ್ರನಾಗಿ ಮಿಂಚಿದ್ರೆ ಹೇಗಿರುತ್ತೆ...?
ಅವನ ಪಕ್ಕದಲ್ಲಿದ್ದ ಮತ್ತೊಬ್ಬ ಅಂದ್ಕೋತಾನೆ. ಅವನು ಏನು ಅಂದು ಕೊಳ್ತಾನೊ ಅದು ವಿರುದ್ದವಾಗಿ ಆಗಿದ್ರೆ ಅಂತ ಯೋಚನೆ ಮಾಡ್ತಾನೆ.
ಇಷ್ಟು ಯೋಚನೆ ಮಾಡಿದ್ದೆ ಮಾಡಿದ್ದು ತಕ್ಷಣ ಸತ್ತೋಗಿ ಮೇಲೆ ಅವನೆ ನಕ್ಷತ್ರ ಆಗ್ತಾನೆ.
..........................................................................
ನಾವಿಕ
======
ಒಮ್ಮೆ ದೋಣಿಯಲ್ಲಿ ಹೋಗುವಾಗ ಪ್ರಯಾಣಿಕ ಅಂಬಿಗನ ಹತ್ತಿರ ಕೇಳ್ತಾನೆ. ನೀನು ಆ ಕಡೆಯಿಂದ ಈ ಕಡೆ, ಈ ಕಡೆಯಿಂದ ಆ ಕಡೆ ಪ್ರತಿಯೊಬ್ಬರನ್ನು ದಡ ಸೇರಿಸಿ ಅವರ ದಾರಿನ ಸೇರಿಸ್ತಿ ಅಲ್ವಾ ಇದರಿಂದ ಏನು ಸಿಗುತ್ತೆ ನಿನಗೆ ಅಂತ ಕೇಳ್ದಾಗ, ಅಂಬಿಗ ಹೇಳ್ತಾನೆ. ನನಗೆ ಏನು ದೊರೆಯುತ್ತೊ ಗೊತ್ತಿಲ್ಲ ಆದ್ರೆ ನನ್ ದೋಣಿಲಿ ಪ್ರಯಾಣಿಸುವ ಪ್ರತಿಯಾಬ್ಬರಿಗು ಸಿಗುತ್ತೆ ಅದೇ.. ಅವರ ಅವರ ದಾರಿ, ಗುರಿ.
..........................................................................
ತಾಯಿ-ಮಗಳು
===========
No comments:
Post a Comment