Thursday, May 30, 2019

ಪತಂಗ

ಹಾರಿ ಹೋಗೊ
ಬಿಳಿ ಪತಂಗವೆ
ಯಾಕೆ ನಿಂತಿರುವೆ ನೀನು...?
ಭಯವೊ
ಮೌನ ಬೇಸರವೊ
ಹೇಳತೀರದೆ
ನಿನ್ನೀ ಗೆಳೆಯನ ಬಳಿ....
ಆ ದೂರದ
ಬಯಕೆಯೆ ಹೇಳು
ಅದನ್ಯ
ಶಾಂತಿಯೆ ಹೇಳು.....

ಶಾಲೆ ಪ್ರಾರಂಭದ ನೆನಪು

ನನ್ ಕಲರ್ ಫುಲ್ ಕತೆ...
                               ......ನನಗಿನ್ನು ನೆನಪಿದೆ, ನಾನಾವಾಗ 2ನೇ ತರಗತಿಯಲ್ಲಿದ್ದೆ. ಶಾಲೆ ಪ್ರಾರಂಭ ಅಂತ ಅಂದ್ರೆ. ನಮಗೆ ಹಬ್ಬ, ಹ್ಹಾ....ಹ್ಹಾ....ಅಲ್ಲ ಅಲ್ಲ ಬೇಜಾರು. ಯಾಕಾದ್ರು ಶಾಲೆ ಶುರು ಆಯ್ತೊ, ಯಾಕಾದ್ರು ರಜೆ ಮುಗೀತೊ ಅನ್ನೊ ಮನದ ಗೊಣಗು.
 ನಿಜ ಹೇಳ್ಬೇಕಂದ್ರೆ ನನಗೆ ಆವಾಗ ರಜೆ ಕಳೆದು ಶಾಲೆ ಹೋಗೋದಂದ್ರೆ ಎಲ್ಲಿಲ್ಲದ ಉದಾಸಿನ ಭೂತ ಮತ್ತು ಭಯ. ಯಾರದೋ ಇಚ್ಚೆಗೆ ಹೋಗೊ ತರ ಹೋಗೋದು. ಈ ಎಲ್ಲ ಭಯಕ್ಕು ಒಂದು ನೇರವಾದ ಕಾರಣ ಇತ್ತು. ಅದು ಟೀಚರ್ ಕೊಟ್ಟಿದ್ದ ಹೋಂ ವರ್ಕ್ ಮಾಡದೇ ಇರೋದು. ರಜೆಲಿ ಅಷ್ಟೊ ಇಷ್ಟೊ ಬರೆದು ನಂತರ ಚಿಕ್ಕಿ ಮನೆ- ಗಿಕ್ಕಿ ಮನೆ ಅಂತ ತಿರುಗೋದು. ಈ ಹೋಂ ವರ್ಕ್ ಮಾಡಿದ್ರೆ ಭಯ ಇರ್ತಿರ್ಲಿಲ್ವೇನೊ ಅನ್ಸುತ್ತೆ. ರಜೆ ಪೂರ್ತಿ ಮಜಾ ಹಬ್ಬ ಹೋಂ ವರ್ಕಿಗೆಲ್ಲ ಬಾಯ್ ಬಾಯ್. ಶಾಲೆ ಬಂತೊ ಪುಸ್ತಕ ಹುಡುಕುದೇನೊ, ಪುಟ ತಿರುವುದೇನೊ. ನಾನು ಶಾಲೆ ಪ್ರಾರಂಭ ದಿನವೆ ಹೋಗ್ತಿರ್ಲಿಲ್ಲ. ಎರಡು ದಿನ ಆದ್ಮೇಲೆ ನಿಧಾನಕ್ಕೆ ಹೋಗೋದು. ಶಾಲೆಲಿ ಮೊದಲನೆ ದಿನ ಪಾರಿವಾಳ ಹಿಕ್ಕೆ, ಕಸ ಕಡ್ಡಿ ಇದೆಲ್ಲ ಶುಚಿ ಮಾಡೊ ಕೆಲ್ಸ ಇರ್ತಿತ್ತು ಆದ್ರಿಂದ ನನಗೆ ಅಜ್ಜಿನೆ ಬೇಡ ಹೋಗುದು ಅಂತ ಹೇಳೋರು. ಇಷ್ಟ್ ಹೇಳಿದ್ದೆ ತಡ ನನಗೆ ತೈ ತೈ ಕುಣಿತ, ತುಂಬ ಖುಷಿ.
  ........ಹೇಳೋಕೆ ಅಂತ ಹೊರಟ್ರೆ ತುಂಬಾನೆ ಇರುತ್ತೆ. ಇಷ್ಟು ಸಾಕು ಅಲ್ವಾ......
  ನಿಮ್ಮ ನಿಮ್ಮ ಲೈಫಲ್ಲು ಇಂತ ಮೆಮೋರಿಸ್ ಇದ್ರೆ ಖಂಡಿತಾ ತಪ್ಪದೆ ಬರೀರಿ ಸರಿನಾ ಬ ಬಾಯ್, ಮತ್ತೆ ಸಿಗೋಣ ನೆನಪಿನೊಂದಿಗೆ
  Stage from ನೆನಪಿನ ನಾವಿಕ@ಪ್ರಸಾದ್.....🖍

ನೆನಪು

               =ಮರೆತರು ಮರೆಯಾಗದ=
                           ಎಂದೂ ಬೆಂಬಿಡದ....


.............ಎಂದೂ ಭಾವ ತೀರದ ಮರೆಯಲಾಗದ ನೆನಪುಗಳು ಅಂದ್ರೆ..... ಅದು Child life. ನಿಜ ಅಲ್ವ, ಅಲ್ಲಿ ನಾವ್ ಹ್ಯಾಗ್ ಇರ್ತೀವೊ ಹಾಗೆ, ಅಲ್ಲಿ ಭೇದ, ತಿರಸ್ಕಾರ , ಮನಸ್ತಾಪ ಎಂದು ಬರಲ್ಲ.

ಮಾವ


ನನ್ನ ಭಕುತಿಗೆ ಮೆಚ್ಚಿ
ನೀ ಒಲಿಯಲಿಲ್ಲ...
ನನ್ನ ಮಾವ ಒಲಿದನು |
========================================
ಮಾವ ನೀನು
ನನಗೊಲಿದರು...
ನಿನ್ನ ಮಗಳು
ನನಗೊಲಿಯಲಿಲ್ಲ.
========================================
ಬರಿಯ ಮಾತಿಗೆ
ಅಳಿಯ ಅನ್ನೊ ಪದವು
ನನಗೆ ಬೇಕಿಲ್ಲ.
ನಿನ್ನ ಮಗಳಿಲ್ಲಂದ ಮೇಲೆ
ಅಳಿಯ ಪಟ್ಟವು 
ಬೇಕಿಲ್ಲ.
========================================

ಕೇಳಿಸದೆ ನಿನಗೆ

ಓ.....ಹಿಮಾಲಯವೆ
ಕೂಗಿ ಕೂಗಿ
ಹೇಳುವೆ ನಾನು...
ನೀನಾದರು ಕರಗಿ ಬಂದು
ಅಳುವ ಕುಡಿ ಕಂದಗೆ
ನೀರನುಣಿಸು.


ಹನಿ ಹನಿ


ನಶೆ

ನೀ ನುಡಿಸಿದ ಹಾಡಿಗೆ
ನಾ ಕಿವಿಗೊಡಲಿಲ್ಲ...
ಕಿವಿಗೊಟ್ಟು ಆಲಿಸಿದರೆ
ನಶೆಯ ಹಾಡೆಂದು ತಿಳಿಯಲಿಲ್ಲ..  .. .. !!

ಮ  ತ್ತು

ನೀ ಕೊಟ್ಟ ಮುತ್ತು
ನನಗೇರಿಸಿತು.....ಮ  ತ್ತು.

ಸ್ಥಿತಿ

ಮೌನದ ಸುಸ್ಥಿತಿಯೊ
ಗೌನದ ಸ್ಥಿತಿಯೊ......ssss.

ಬೇಸರಿಸದಿರು

ಪ್ರತಿ ರಾತ್ರಿ 
ಕನವರಿಕೆಯು ನಿನ್ನದಲ್ಲ..
ಆ ಗುಹಾಂತದಲಿ ತೇಲಿಸೊ
ಮಣಗುಡೊ ರಾತ್ರಿ.

ಆ ರಾತ್ರಿ

ನವ ದಂಪತಿಗೆ
ಮೊದಲ ರಾತ್ರಿಯಾದರು
ಅರೆ ನಿದಿರೆಯಾಯಿತಲ್ಲ.

ನವದಂಪತಿಗೆ

ಹಗಲಲು ಮೋಸ ಮಾಡಿದ
ಬ್ರಾಹ್ಮಣ .. .. .. ..!!  !!
ಅರುಂಧತಿ ನಕ್ಷತ್ರ ಎಂದು ಹೇಳಿ.

ವಿಪರ್ಯಾಸ

ಸದಾ... ಸಕಲ
ಜೀವ ಕೋಟಿಗು
ಕಾಪಾಡು ದೇವ
ಅನ್ನುವ ಭಕ್ತನು..
ಹರಕೆಗೆ ಬಲಿ ಕೊಡುವಾಗ ಮರೆತ...!!

ಹನಿ ಹನಿ

A ಇದು ತರವಲ್ಲ ನಿನಗೆ...
    ಇಲ್ಲೆಲ್ಲವೂ ಮಿತ್ಯ.
B ಸತ್ಯಕೆ ಸಹಜ ಸಾವು....
    ಸುಳ್ಳಿಗೆ ನರಕದ ಸಾವು.
C ಅರಿಯೊ ನೀನು...
    ಅರಿತು ತಿಳಿಯೊ ನೀನು.
D ಮೊಬೈಲ್ ಮರಳೊ...
    ನೆಟ್ ಪ್ಯಾಕ್ ಮರಳೊ.

ಚಂದಿರ

ಆ ರಾತ್ರಿ.......
ಅಮಾವಸ್ಯೆ ಚಂದಿರ!
ನರಿಗಳು ಊಳಿಡುವ
ಧಾವಂತಕೆ
ಚಂದಿರನು ಬೆಳಗಿದ.

Wednesday, May 29, 2019

Tuesday, May 28, 2019

Wife


ಇಲ್ಲಿ ಎಲ್ಲಾ ಬಂಧಕ್ಕೂ ಹೆಸರಿಲ್ಲ.!!


ನಾಡಗೀತೆಗಳ ಬಗ್ಗೆ ನಿಮಗೆ ಗೊತ್ತಾ?

 .......ಪ್ರಿಯ ಓದುಗ ಮಿತ್ರರೆ,
ನಿಮಗೊಂದು ವಿಷಯ ಗೊತ್ತಿರಲಿ. ನಮ್ಮ ನಾಡಿಗೆ 3 ನಾಡಗೀತೆಗಳ ಕೊಡುಗೆಯನ್ನು ನೀಡಲಾಗಿದೆ. ಆ 3 ನಾಡಗೀತೆಗಳಲ್ಲಿ ಒಂದನ್ನು ಆಯ್ದುಕೊಂಡು ನಾಡಗೀತೆಯಾಗಿ ಘೋಷಿಸಲಾಗಿದೆ. ಆ 3 ನಾಡಗೀತೆಗಳಲ್ಲಿ ...
1. ಜೈ ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ.( ಕುವೆಂಪು )
2. ಜೋಗದ ಸಿರಿ ಬೆಳಕಿನಲ್ಲಿ......(  ಕೆ. ಎಸ್. ನಿಸಾರ್. ಅಹಮದ್  )
3. ಹಚ್ಚೇವು ಕನ್ನಡದ ದೀಪ......( ಡಿ. ಎಸ್. ಕರ್ಕಿ  )
       ಈ ಮೂರು ಗೀತೆಗಳಲ್ಲಿ ಕುವೆಂಪು ರಚನೆಯ "ಜೈ ಭಾರತ ಜನನಿಯ ತನುಜಾತೆ.... ಗೀತೆಯನ್ನು ನಮ್ಮ ನಾಡಗೀತೆಯಾಗಿ ಬಳಸಿಕೊಳ್ಳಲಾಯಿತು. ಕಾರಣ ಈ ಮೂರು ಗೀತೆಗಳು ನಾಡಗೀತೆಯಾದರು ಕುವೆಂಪುರವರ ವಿಭಿನ್ನ ಸಾಲುಗಳು ನಮ್ಮ ನಾಡಿನ ನಮ್ಮ ದೇಶದ ಐಕ್ಯತೆಯನ್ನು ಸಾರಿ ಹೇಳುವ ಸಾಲುಗಳು ಮತ್ತು ಒಂದು ಕುಟುಂಬ ವ್ಯವಸ್ಥೆ, ಒಕ್ಕೂಟ ವ್ಯವಸ್ಥೆಯನ್ನು ಬಿಂಬಿಸಿ ರಚಿಸಲಾದ ಅರ್ಥ ಪೂರ್ಣ ಸಾಲುಗಳು. ಆದರಿಂದ ಕುವೆಂಪು ರಚನೆಯ ಗೀತೆಯನ್ನು ನಾಡಗೀತೆಯಾಗಿ ಬಳಸಲಾಗಿದೆ.
Stage from ನೆನಪಿನ ನಾವಿಕ@ಪ್ರಸಾದ್.....🖍

ಮರಿ ಚಾಣಕ್ಯ














ತಲೆ ಬೇನೆ



16
15


14
13


12
11


10


9


8
7


6

5

4




2

1

ಹಿರಿಯರ ಮಾತುಗಳು


23
22

21



20

19

18
17

16

15

14

13


12


11


                                        10
                    


9



8
 


7


6

5


4


3

2

1

ಹನಿ ಜನಿ

ಇಲ್ಲಿ ಯಾರಿಗು ಯಾರು ಇಲ್ಲ.... ನಮಗೆ ನಾವೆ ಎಲ್ಲ....||